Tuesday, November 5, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೧


ಲಿಂಕ್ಡ್-ಇನ್.ಕಾಂ
ಹಲವರು ಕೇಳಿರ್ತೀರಾ,ಕೆಲವರು ಸೇರಿರ್ತೀರಾ.
ಕೇಳಿದ್ರು ಆಸಕ್ತಿ ತೋರ್ಸಿರಲ್ಲ,ಸೇರಿದ್ರು ಅದನ್ನ ಸಂಪೂರ್ಣವಾಗಿ ಉಪಯೋಗಿಸಿರಲ್ಲ!!
ಒಟ್ನಲ್ಲಿ ನಂ ಕನ್ನಡಿಗರು ಉದ್ಧಾರ ಆಗ್ತಿಲ್ಲ :( (on an average)

 ಹೆಚ್ಚಾಗಿ ನಮ್ಮ ಕನ್ನಡಿಗರ ಬಾಳು ಹೀಗೆ ಆಗ್ತಿರೊದು ದುಖ:ಕರ ಸಂಗತಿ.
ಇದನ್ನ ಬದಲಿಸಬೇಕು ಅಂದರೆ ನಮಗೆ ಅನುಕೂಲಕರ ವಾತರವರಣ ಸೃಷ್ಟಿ ಆಗಬೇಕು.
ಸೃಷ್ಟಿ ಆಗಬೇಕು ಅಂದ್ರೆ ನಮಗೆ ಯಾರೊ ಮಾಡಿಕೊಡೊಕ್ಕೆ ಆಗಲ್ಲ,ಮಾಡಿಕೊಟ್ರು ಅದು ಶಾಶ್ವತ ಇರಲ್ಲ!!
ಅದಕ್ಕೆ ನಮಗೆ ತಕ್ಕ ಅನುಕೂಲಕರ ವಾತವರಣ ನಾವೆ ಸೃಷ್ಟಿ ಮಾಡಿಕೊಳ್ಳಬೇಕು, ಆಗ ಮಾತ್ರ ನಾವು ಕನ್ನಡಿಗರು ಉದ್ಧಾರ ಆಗೊಕ್ಕೆ ಸಾಧ್ಯ.
         ಒಂದು ನಟ್ ತೆಗಿಬೇಕು ಆಂದರೆ ಸ್ಕ್ರೂ ಡ್ರೈವರ್ ಅಥವಾ ಸ್ಪಾನೆರ್ ಎಂಬ ಸಾಧನ ಬೇಕೊ ಹಾಗೆ ನಮ್ಮ ವೃತ್ತಿಜೀವನ ಬದಲಾಗಬೇಕು ಅಂದರೆ ಅದಕ್ಕೆ ತಕ್ಕ ಅನುಕೂಲಕರ ಸಾಧನಗಳನ್ನು ಉಪಯೋಗಿಸಬೇಕು. ಹೀಗಿದ್ದ ಮೇಲೆ ನಮ್ಮ ವೃತ್ತಿ ಜೀವನದ ಅನುಕೂಲಕರ ಸಾಧನಗಳು ಯಾವುದಾವುದು?
 
           ಸಾಧನಗಳು ಯಾವುದು ಅಂತ ಹುಡುಕೊ ಮುಂಚೆ, "ಏನನ್ನು"ರಿಪೇರಿ ಮಾಡಲು "ಏನು"ಬೇಕು ಅನ್ನೊದೆ ಮೂಲ ಪ್ರಶ್ನೆ. ಇದು ಗೊತ್ತಾದ್ ಮೇಲೆ ಅದನ್ನ "ಹೇಗೆ"ಸಾಧಿಸುತ್ತೇವೆ ಅನ್ನೊದೆ ಯಕ್ಷ ಪ್ರಶ್ನೆ.

 "ಏನನ್ನು" ಅನ್ನೊದು ಇಲ್ಲಿ "ವೃತ್ತಿ ಜೀವನ" ಅಂತ ಪರಿಗಣಿಸಿ ಮುಂದೆ ಸಾಗೋಣ.

ಕೈಲಿ ಸರ್ಟಿಫಿಕೇಟ್ ಇದೆ,ಸಾಧಿಸಬೇಕು ಅನ್ನೊ ಹಂಬಲ ಇದೆ ಅಲ್ವಾ?
ಕೇವಲ ಹಂಬಲ/ಆಸೆ ಇದ್ರೆ ಸಾಕಾ?? ಮುಖ್ಯವಾಗಿ ಛಲ ಇರಬೇಕು. ಛಲ ಇದ್ದಾಗಲೆ "ಏನನ್ನು"ಸಾಧಿಸುವುದಕ್ಕೆ "ಏನೆಲ್ಲಾ"ಮಾಡಬೇಕೊ ಅವುಗಳ ದಾರಿ ಕಂದು ಹಿಡಿಯಲು ಪ್ರಯತ್ನಿಸುತ್ತೇವೆ. ಈ ಲೇಖನ ಓದುತ್ತಿರುವುದೆ ನಿಮ್ಮ ತುಡಿತಕ್ಕೆ ಸಾಕ್ಷಿ.

            "ವೃತ್ತಿ ಜೀವನ"ಸುಧಾರಿಸಲು ಅಥವಾ ದಾರಿಗೆ ತರಲು ನಾವು ಸದಾ ಪ್ರಯತ್ನಿಸುತ್ತಿರಬೇಕಾಗುತ್ತದೆ. ನಮ್ಮ ಆಚಾರ ವಿಚಾರಗಳನ್ನು ಸುಧಾರಿಸಬೇಕಾಗುತ್ತದೆ,ಹಳೆಯ ನೀರುನ್ನು ಹರಿಯಲು ಬಿಟ್ಟು ಹೊಸ ನೀರು ನಮ್ಮ ಆಲೊಚನಾ ಕೊಳದಲ್ಲಿ ತುಂಬಬೇಕಾಗುತ್ತದೆ. ಯಾವಾಗ ಮೌಢ್ಯ(ತಿಳುವಳಿಕೆ ಇಲ್ಲದಿರುವುದು), ಅಹಂಕಾರ ಎನ್ನುವುದು ತಲೆಯಲ್ಲಿ ತುಂಬಿರುತ್ತದೆಯೊ ಅಲ್ಲಿಯವರೆಗು ನಮ್ಮ ಜ್ಞಾನದ ಕೊಳದೊಳಗೆ ಹೊಸ ನೀರು ತುಂಬಲು ಆಗುವುದಿಲ್ಲ.
       
            ಈ ಮಾತು ಯಾಕೆ ಬಂತು ಅಂದರೆ ಕನ್ನಡಿಗರಿಗೆ ಸಹಾಯ ಆಗಲಿ ಅಂತಾನೆ ಹಲವಾರು ಕನ್ನಡಿಗರು ತಮ್ಮ ನಿತ್ಯ ಜೀವನದಲ್ಲಿ ಸಮಯವನ್ನು ಮುಡಿಪಾಗಿಟ್ಟು ಇತರ ಕನ್ನಡಿಗರಿಗೆ ಸಹಾಯ/ಮಾರ್ಗದರ್ಶನ ನೀಡುತ್ತಾರೆ. ಆದರೆ ಸಹಾಯ ಕೇಳಿ ಬಂದ ಕನ್ನಡಿಗರಿಗೆ ಸಹಾಯ/ಮಾರ್ಗದರ್ಶನ ಸಿಕ್ಕ ಮೇಲೆ ಧನ್ಯವಾದ ತಿಳಿಸಬೇಕೆಂಬ ಕನಿಷ್ಟ ಸೌಜನ್ಯ ಇಲ್ಲದಿರುವುದು ಅವರವರ ದುಸ್ಥಿತಿಗೆ ಕಾರಣ.ಮಾರ್ಗದರ್ಶಕರ ಉತ್ಸಾಹವನ್ನು ಬೇಕಾಬಿಟ್ಟಿಯಾಗಿ ತಿಳಿಯುವರಿಗೆ ಮತ್ತೊಮ್ಮೆ ಸಹಾಯ ಮಾಡಲು ಯಾರು ಬರುತ್ತಾರೆ? ಇದರಿಂದ ಇತರರಿಗೂ ನಷ್ಟವಾಗುತ್ತದೆ. ವಿನಮ್ರತೆ/ಸೌಜನ್ಯತೆ ಅನ್ನುವುದು ಕಲಿಯಲು ಇತರರೊಂದಿಗೆ ಬೆರೆಯಲು ಬೇಕಾಗಿರುವಂತಹ ಅತ್ಯಂತ ಮುಖ್ಯವಾದ ಸಾಧನ. ಈ ಮೊದಲ ಸಾಧನ ಇಟ್ಟುಕೊಂಡರೆ ನೀವು ಸಹಾಯ ಯಾಚಿಸಿದಾಗಲೆಲ್ಲ ಸಹಾಯ ಸಿಗುತ್ತದೆ.

                 ನೀವು ವಿನಮ್ರ ಭಾವದ ಕನ್ನಡಿಗರು ಅನ್ನುವ ಏಕೈಕ ಕಾರಣಕ್ಕೆ ನಿಮಗೆ ಕೆಲಸ ಕೊಡಲು ಆಗುತ್ತದೆಯೆ? ಸಾಧ್ಯವಿಲ್ಲ!! ಹಾಗಾಗಿ ನಿಮಗೆ ಬೇಕಾಗಿರುವ ಎರಡನೆಯ ಸಾಧನ ನಿಮ್ಮ ಗುರಿ,ಜ್ಞಾನ,ಜಾಣ್ಮೆ,ಸಾಧನೆಗಳನ್ನು ಪ್ರತಿಬಿಂಬಿಸುವ ರೆಸ್ಯುಮೆ/ವೃತ್ತಿ ಜಾತಕ(curriculum vitae) ಅಗತ್ಯ.ವೃತ್ತಿ ಜಾತಕ ಹೇಗಿರಬೇಕೆನ್ನುವುದನ್ನು ಮುಂಚೆ ಬರೆದಿದ್ದೇನೆ.

             ವೃತ್ತಿ ಜಾತಕವು ನಿಮ್ಮ ಪ್ರತಿಬಿಂಬವೆಂದೆ ತಿಳಿಯಿರಿ, ಎಲ್ಲಾ ಕಡೆಯಲ್ಲಿ ನೀವಿದ್ದುಕೊಂಡು ನಿಮ್ಮ ಗುಣಗಾನ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿಯೆ ನಿಮ್ಮ ಪರವಾಗಿ ನಿಮ್ಮ ಜಾಣ್ಮೆ,ಸಾಧನೆಯ ಬಗ್ಗೆ ನಿಮ್ಮ ವೃತ್ತಿ ಜಾತಕವು ಮಾತಾಡಬೇಕು. ವೃತ್ತಿ ಜಾತಕವನ್ನು ಹಗುರವಾಗಿ ಪರಿಗಣಿಸಿದರೆ ನಿಮ್ಮನ್ನು ಸಹ HR ಅಷ್ಟೆ ಹಗುರಾಗಿ ಪರಿಗಣಿಸಿ ನಿಮ್ಮನ್ನು ಅವಕಾಶವಂಚಿತರಾಗುವಂತೆ ಮಾಡಬಹುದು.
ವೃತ್ತಿ ಜಾತಕ ಹೇಗಿರಬೇಕೆನ್ನುವುದನ್ನು ಮತ್ತೊಮ್ಮೆ ಓದಿ ಇಲ್ಲಿಂದ ಮುಂದೆ ಓದಿರಿ.

              ಈಗ ಎರಡನೆಯ ಸಾಧನವನ್ನು ನೀವು ನಿಮ್ಮ ಬತ್ತಳಿಕೆಯಲ್ಲಿ ಇಟ್ಟಿಕೊಂಡಿರಲ್ಲವೆ?
ನೀವು ಈಗ ವಿನಮ್ರಭಾವದ + ಒಳ್ಳೆಯ ವೃತ್ತಿ ಜಾತಕ ಇರುವ ಕನ್ನಡಿಗ ಎಂದಾಯಿತಲ್ಲವೆ ಇಷ್ಟಕ್ಕೆ ನಿಮಗೆ ಕೆಲಸ ಸಿಗುತ್ತದೆಯೆ? ಯೋಚಿಸಿ

ಉಹು, ದೇವರು ವರ ಕೊಟ್ಟರು ಪೂಜಾರಿ ವರ ಕೊಡಲ್ಲ ಎನ್ನುವ ಹಾಗೆ ಆಗಬಾರದು ಹಾಗಿದ್ದರೆ ಏನು ಮಾಡಬಹುದು?

ಯೋಚಿಸಿ, ನನ್ನೊಂದಿಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ

--ಪ್ರಸಾದ್
 (ಮುಂದುವರೆಯುವುದು..)  

No comments:

Post a Comment