Tuesday, November 12, 2013

ವೃತ್ತಿ ಜೀವನಕ್ಕೆ ಅಗತ್ಯವಿರುವ ಸಾಧನಗಳು - ಭಾಗ ೨

ನೀವು ವಿನಮ್ರ ಭಾವದ ಒಳ್ಳೆಯ ವೃತ್ತಿ ಜಾತಕ ಇರುವ ಕನ್ನಡಿಗ ಎಂದಷ್ಟಕ್ಕೆ ನಿಮ್ಮ ಅವಕಾಶಗಳು ಹೆಚ್ಚಾಗಬಹುದೆ ಹೊರತು ಕೆಲಸದ ಖಾತ್ರಿ ಆಗುವುದಕ್ಕೆ ಸಾಧ್ಯವಿಲ್ಲ.
ನೀವು ಯಾವುದಾದರು ಕಂಪ್ಯೂಟರ್ ಕೋರ್ಸ್ ಮಾಡುವ ಮುನ್ನ ಜಾಬ್ ಅಸ್ಸಿಸ್ಟೆನ್ಸ್ ಇರುವುದನ್ನೋ ಅಥವಾ ಜಾಬ್ ಗ್ಯಾರಂಟೀ ಹೇಳುವಂತಹ ಸಂಸ್ಥೆ ಆಯ್ಕೆ ಮಾಡಿಕೊಳ್ಳುತ್ತೀರೊ?  ಖಂಡಿತವಾಗಿಯು ಜಾಬ್ ಗ್ಯಾರಂಟೀ ಕೊಡುವ ಸಂಸ್ಥೆಯನ್ನೆ ಜಾಣರು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಯಾವ ಜಾಣ ಸಂಸ್ಥೆಯು ಜಾಬ್ ಗ್ಯಾರಂಟೀ ಭರವಸೆ ಕೊಡುವುದೆ ಇಲ್ಲ. ಅವರು ಹೇಳುವುದಿಷ್ಟೆ ನಿಮಗೆ ನಾವು ಎಲ್ಲವನ್ನು ಹೇಳಿಕೊಡುತ್ತೇವೆ, ಕೆಲಸ ಸಿಗಲು ಸಹಾಯ ಮಾಡುತ್ತೇವೆ (ಜಾಬ್ ಅಸ್ಸಿಸ್ಟೆನ್ಸ್) ಹೊರತು ಕೆಲಸ ಕೊಡಿಸುವ (ಜಾಬ್ ಗ್ಯಾರಂಟೀ) ಭರವಸೆ ಕೊಡುವುದಿಲ್ಲ ಅಂತ ಹೀಗಿದ್ದ ಮೇಲೆ ನಿಮಗೆ ಕೆಲಸ ಸಿಗಲು ನಿಮ್ಮ ಪ್ರಯತ್ನವೆ ಮುಖ್ಯ ಎಂದಾಯಿತಲ್ಲವೆ?
   ಯಾವನಿಗೊ ಸಾವಿರಾರು ರುಪಾಯಿ ಕೊಟ್ಟು ಮತ್ತೆ ಬೀದಿಗೆ ಬಂದರೆ ಪ್ರಯೋಜನವೇನು? ಕೊಟ್ಟವನು ಕೋಡಂಗಿ ಈಸ್ಕೊಂಡೋನು ಈರಭದ್ರ ಎನ್ನುವ ಹಾಗೆ ಆಗಬಾರದು. ಹಾಗೆಂದ ಮಾತ್ರಕ್ಕೆ ಅವರು ಹೇಳಿಕೊಡುವ ಕೋರ್ಸ್‍ಗಳು ವೇಸ್ಟ್ ಎನ್ನುತ್ತಿಲ್ಲ.ಜ್ಞಾನ ಯಾವತ್ತು  ನಿಷ್‌ಪ್ರಯೋಜಕವಾಗುವುದಿಲ್ಲ, ಎಂದೆಂದಿಗೂ ಜ್ಞಾನಕ್ಕಿಂತ ಮಿಗಿಲಾದ ಸಂಪತ್ತಿಲ್ಲ!!

ಎಲ್ಲಿ ಕೋರ್ಸ್ ಮಾಡುತ್ತೀರಾ, ಯಾವ ಮಟ್ಟದ ಕೋರ್ಸ್ ಮಾಡುತ್ತೀರಾ ಎನ್ನುವುದು ಅವಶ್ಯಕ.
ಉದಾಹರಣೆಗೆ :- ಒಂದು ಖಾಲಿ ಹುದ್ದೆಗೆ ಕನಿಷ್ಟ ಅರ್ಹತೆ ೯೦% ಇದೆ ಎಂದುಕೊಳ್ಳೊಣ ಎಲ್ಲಾ ವೃತ್ತಿ ಜಾತಕಗಳು ಪರಿಷ್ಕರಣೆಗೊಂಡು ಕೊನೆಗೆ ೧೦ ಅಭ್ಯರ್ಥಿಗಳು ಆಯ್ಕೆ  ಆಗುತ್ತಾರೆ. ಹತ್ತಕ್ಕೆ ಹತ್ತೂ ಜನ ಸರಿಯಾಗಿ ೯೦% ಇರುವ ಅಭ್ಯರ್ಥಿಗಳು ಅಂದುಕೊಳ್ಳೋಣ, ಇವರಲ್ಲಿ ಆಯ್ಕೆ ಮಾಡಬೇಕೆಂದರೆ ಒಂದು ಸುತ್ತಿನ ಪರಿಷ್ಕರಣೆ ಆದಾಗ  ಯಾರಿಗೆ ಹೆಚ್ಚಿನ ನಿಪುಣತೆ(ಸ್ಕಿಲ್ಲ್ ಸೆಟ್) ಇದೆ ಅಂತ ನೊಡುತ್ತಾರೆ ಅದರಲ್ಲಿ   ಸಿ - ೪ ಜನ, ಸಿ,ಸಿ++ -೩ ಜನ, ಸಿ,ಸಿ++,ಜಾವ - ೩ ಜನ ತಿಳಿದವರಾಗಿದ್ದರೆ ನಿಮ್ಮ ಊಹೆಯ ಪ್ರಕಾರ ಯಾರನ್ನು ಕರೆಯಬಹುದು?? ಇಂಟರ್ವ್ಯೂವ್ ಮಾಡುವವರು ಅವರ ಕೆಲಸ ಸುಲಭ ಮಾಡಿಕೊಳ್ಳಲು ನೋಡುತ್ತಾರೆಯೊ ಹೊರತು ಮೊದಲಿಗೇನೆ ನಿಮ್ಮ ಜ್ಞಾನವನ್ನು ಓರೆಗೆ ಹಚ್ಚಿ ಆಯ್ಕೆ ಮಾಡಲು ನಿಂತಿರುವುದಿಲ್ಲ. ಹಾಗಾಗಿ ಕೊನೆಗೆ ಸಿ,ಸಿ++,ಜಾವ ತಿಳಿದ ೩ ಜನ ಆಯ್ಕೆ ಆಗುತ್ತಾರೆ ಅಲ್ಲಿಗೆ ೯೦% ತೆಗೆದು ಸಿ,ಸಿ++ ತಿಳಿದ ಸುಮಾರು ೭ ಜನರ ಅವಕಾಶ ತಪ್ಪಿತಲ್ಲವಾ? ಅವರಿಗೆ ನಿಜವಾಗಲು ಎಷ್ಟು ಟ್ಯಾಲೆಂಟ್ ಇದ್ದರೆ ಏನು ಪ್ರಯೊಜನವಾದಂತಾಯಿತು? ಇನ್ನು ಆಯ್ಕೆ ಆದ  ೩ ಜನರಲ್ಲಿ ಯಾರು ಎಂತಹ ಪ್ರಾಜೆಕ್ಟ್ ಮಾಡಿದ್ದಾರೆ ಎನ್ನುವುದನ್ನು ನೋಡಿ ಪರಿಷ್ಕರಣೆ  ಮಾಡಿ ಒಬ್ಬನ್ನ(ಳ)ನ್ನು ರಿಜೆಕ್ಟ್ ಮಾಡಿದರೆ, ಒಳ್ಳೆಯ ಸಂಸ್ಥೆಯಲ್ಲಿ ಸಾವಿರಾರುಗಟ್ಟಲೆ ದುಡ್ಡುಕೊಟ್ಟು ಕೋರ್ಸ್
ಮಾಡಿ ಕಳಪೆ ಪ್ರಾಜೆಕ್ಟ್ ಮಾಡಿದರೆ ಏನು ಬಂತು ಪ್ರಯೋಜನ? ಕೊನೆಗೂ ಅವಕಾಶ ತಪ್ಪಿತಲ್ಲವಾ? ಇನ್ನು ಕೊನೆಯ ಸುತ್ತಿಗೆ ಆಯ್ಕೆಯಾದ ಇಬ್ಬರಲ್ಲಿ ಒಂದೆ ಸಮನಾದ ಜ್ಞಾನವಿದ್ದರೆ ಅವರು ಇಂಟರ್ವ್ಯೂವ್ ಅಲ್ಲಿ ಹೇಗೆ ಉತ್ತರಿಸಿದರು ಯಾವ ರೀತಿಯ ಜಾಣ್ಮೆಯಿಂದ ಉದಾಹರಣೆ ಕೊಟ್ಟು ಉತ್ತರಿಸಿದರು ಅನ್ನುವುದರ ಮೇಲೆ ಹೋಗುತ್ತದೆ.

ಮೇಲಿನ ಉದಾಹರಣೆ ಕೇವಲ ನನ್ನ ಉತ್ಪ್ರೇಕ್ಷೆ ಅಷ್ಟೆ ಆದರೆ ಅಷ್ಟೆ ಸಾಧ್ಯವು ಸಹ ಇದೆ. ಯೋಚಿಸಿ ೧೦ ಹುದ್ದೆಗೆ ೫೦೦ ಫ್ರೆಷರ್ ಅರ್ಜಿಗಳು ಬಂದರೆ ಈ ರೀತಿಯಾಗಿ ಪರಿಷ್ಕರಿಸುವುದಿಲ್ಲ ಅಂತ ಯಾವ ಗ್ಯಾರಂಟಿ ಇದೆ?    
    ಕೆಲಸ ಹೇಗೆ ಗಿಟ್ಟಿಸುತ್ತೀರಾ ಎನ್ನುವುದು ಮುಖ್ಯವಲ್ಲ!! ನಿಮ್ಮಲ್ಲಿ "stuff" ಇರಬೇಕು, ಆಗಲೆ ನಿಮಗೆ ಮರ್ಯಾದೆ ಇಲ್ಲವಾದರೆ ನಾಯಿಯ ಕುನ್ನಿ ತರಹ ನಿಮ್ಮ ಬಾಳಾಗುತ್ತದೆ. ಎಲ್ಲ ಕಂಪನಿಗಳಲ್ಲೂ ಕಿತ್ತು ತಿನ್ನುವಂತಹ ತೋಳಗಳಿರುತ್ತವೆ ಅವುಗಳ ಜೊತೆ ಹೊಂದಿಕೊಂಡು (ಹೊಂದಿಕೊಳ್ಳದೆ ವಿಧಿಯಿಲ್ಲ) ಮರ್ಯಾದೆ ಗಿಟ್ಟಿಸಬೇಕೆಂದರೆ ಕುನ್ನಿಯ ತರಹ ಬದುಕಲು ಸಾಧವಿಲ್ಲ.
ತೋಳಗಳನ್ನು ಹೆದರಿಸುವಂತಹ ಸಿಂಹವಾಗಬೇಕು, ಸಿಂಹವಾಗಬೇಕು ಅಂದರೆ ನಮ್ಮ ಹತ್ತಿರ ಅತೀ ಸೂಕ್ಷ್ಮ ವಿಚಾರಗಳ ಮಟ್ಟಿಗೆ ಸಹ ಜ್ಞಾನವಿರಬೇಕು. ಇಲ್ಲವೆಂದರೆ ಕನಿಷ್ತ "ಗಾಡ್ಸ್ ಮಸ್ಟ್ ಬಿ ಕ್ರೆಝಿ" ಎಂಬ ಚಿತ್ರದಲ್ಲಿ ಪುಟ್ಟ ಹುಡುಗ ತೋಳಕ್ಕಿಂತ ಎತ್ತರವಿರುವಂತೆ ಭಾವನೆ ಬರಿಸಲು ಮರದ ಚಕ್ಕೆ ತಲೆಮೆಲೆ ಹಿಡಿದು ತೋಳ ಹೆದರಲು ಭಾವನೆ ಮೂಡಿಸುವಂತೆ ನೀವು ಸಹ ನಿಮ್ಮ ಹತ್ತಿರ ಜ್ಞಾನವಿದೆಯೆಂಬಂತೆ ಕನಿಷ್ಟ ಬಿಲ್ಡ್‌ಅಪ್ ಆದ್ರು ಕೊಡಬೇಕು. ಎರಡನೆ ದಾರಿಗೆ ಹೋಲಿಸಿದರೆ ಮೊದಲನೆ ದಾರಿಯೆ ಸುಲಭ ಹಾಗು ಸರಿಯಾದುದು.

 ಈ ಮೂರನೆಯ ಸಾಧನವೆ ಜ್ಞಾನ, ಈಗ ಎಲ್ಲವನ್ನು ಕೂಡಿಸಿದರೆ ನಮ್ಮ ಹತ್ತಿರ ವಿನಮ್ರ ಭಾವನೆ ಇದೆ,ಒಳ್ಳೆಯ ವೃತ್ತಿಯ ಜಾತಕವಿದೆ,ಅಗತ್ಯ ಜ್ಞಾನವಿದೆ. ಇಷ್ಟಿದ್ದ ಮಾತ್ರಕ್ಕೆ ನಿಮಗೆ ಕೆಲಸ ಸಿಗುವ ಹಾಗಿದ್ದರೆ ನೀವು ಈ ಬ್ಲಾಗ್ ಪೋಸ್ಟ್ ಆನು ಇಲ್ಲಿಯವರೆಗು ಮಾರ್ಗದರ್ಶನಕ್ಕಾಗಿ ಓದಿಕೊಂಡು ಬರುತ್ತಲೆ ಇರಲಿಲ್ಲ ಅಲ್ವಾ? ಹಾಗಾದರೆ ಇನ್ನು ಚರ್ಚೆ ಮಾಡದಿರೊ ಅದು ಯಾವ ಸಾಧನ ಬೇಕು ನಿಮಗೆ ಕೆಲಸ ಖಂಡಿತವಾಗಿಯು ಸಿಗಲೆ ಬೇಕು ಅನ್ನೊಕ್ಕೆ?

ಮುಂದುವರೆಯುವುದು..

--ಪ್ರಸಾದ್

No comments:

Post a Comment